ನಿಮ್ಮೊಂದಿಗೆ

ಗೌರವ ಡಾಕ್ಟರೇಟ್ ನಿರಾಕರಿಸಿದ ಜಾರಕಿಹೊಳಿ

ವಿಶ್ವಾರಾಧ್ಯ ಸತ್ಯಂಪೇಟೆ

Spread the love

ಸಚಿವ ಸತೀಶ್ ಜಾರಕಿ ಹೊಳಿ ಅಪರೂಪದ ವ್ಯಕ್ತಿ. ರಾಜಕೀಯದಲ್ಲಿರುವವರಿಗೆ ಸಾಹಿತ್ಯ ಸಂಗೀತ ಕ್ರೀಡೆ ವೈಚಾರಿಕತೆ ಇಷ್ಟವಾಗುವುದು ಅಪರೂಪ.ಆದರೆ ಸತೀಶ ಅವರಿಗೆ ಸಾಹಿತ್ಯಿಕ ಗುಣ ಅಳವಟ್ಟಿದೆ.ಆದ್ದರಿಂದಲೆ ಅವರಿಗೆ ಬುದ್ದ,ಬಸವ,ಅಂಬೇಡ್ಕರ್,ಪುಲೆ,ಪೆರಿಯಾರ ಇತ್ಯಾದಿ ಚಿಂತಕರು ಇಷ್ಟವಾಗುತ್ತಾರೆ.

ಜನ ಮಾನಸದಲ್ಲಿ ಬೇರು ಬಿಟ್ಟಿರುವ ಅಜ್ಞಾನ,ಮೌಢ್ಯ, ಅಂಧಕಾರ ಅಳಿಯಬೇಕೆಂದು ಅವರು ಬಯಸುತ್ತಾರೆ. ಪ್ರತಿ ವರ್ಷವೂ ಅವರು ಸ್ಮಶಾನದಲ್ಲಿ ಅತ್ಯದ್ಭುತವಾದ ಕಾರ್ಯಕ್ರಮ ಮಾಡುತ್ತಾರೆ. ಇಡೀ ರಾಜ್ಯದ ತುಂಬೆಲ್ಲ ಮಾನವ ಬಂಧುತ್ವ ವೇದಿಕೆಯನ್ನು ಕಟ್ಟಿ ವೈಚಾರಿಕತೆಯನ್ನು ತುಂಬಲು ಯತ್ನಿಸಿದ್ದಾರೆ.

ರಾಜಕೀಯ ಅಂದ ಮೇಲೆ ಅಲ್ಲಿ ಎಲ್ಲಾ ರೀತಿಯ ಕಲಾತ್ಮವಾದ ಅಂಶಗಳು ಇರುವಂಥವೆ. ಸತೀಶ ಜಾರಕಿಹೊಳಿಯವರಲ್ಲಿ ಆ ಗುಣ ಇಲ್ಲವಂಥಲ್ಲ. ಆದರೆ ಕನಿಷ್ಠ ಪ್ರಾಮಾಣಿಕತೆ ಈ ರಾಜಕಾರಣಿಯಲ್ಲಿದೆ. ಜಾತಿ ಮತ ಪಂಥಗಳನ್ನು ಮೀರಿ ಬೆಳೆಯಬೇಕೆಂಬ ಹಂಬಲವಿದೆ.

ಪದವಿ ಪಶಸ್ತ್ರಿಗಳಿಗಾಗಿ ರಾಜಕೀಯ ಜನಗಳು ಹಾತೊರೆಯುತ್ತಿರುತ್ತಾರೆ. ದುಡ್ಡು ಕೊಟ್ಟು ಗೌರವ ಪಡೆದುಕೊಳ್ಳುವ ಚಾಳಿಯೆ ಬಿದ್ದಿದೆ. ಆದರೆ ಸತೀಶ ಜಾರಕಿಹೊಳಿಯವರಿಗೆ ಮೈಸೂರು ಮುಕ್ತ ವಿಶ್ವ ವಿದ್ಯಾಲಯ ಕೊಡಮಾಡಲು ಉದ್ದೇಶಿಸುವ ಗೌರವ ಡಾಕ್ಟರೇಟ್ ಪದವಿಯನ್ನು ಸತೀಶ್ ಜಾರಕಿಹೊಳಿ ನಯವಾಗಿಯೆ ನಿರಾಕರಿಸಿದ್ದಾರೆ.

ಡಾಕ್ಟರೇಟ್ ನಿರಾಕರಿಸುವ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ಮತ್ತೊಂದು ಗರಿ ತಂದಿದ್ದಾರೆ.

೦ ವಿಶ್ವಾರಾಧ್ಯ ಸತ್ಯಂಪೇಟೆ

Leave a Reply

Your email address will not be published. Required fields are marked *

Back to top button