
ಯಾದಗಿರಿ : ೨ : ಸರಕಾರಿ ನೌಕರಿದಾರರಿಗೆ ಪ್ರತಿ ಮಾಹೆಯಾನ ಸಂಬಳವಿದ್ದರೂ ಸಹ ಅವರು ಗಿಂಬಳಕ್ಕಾಗಿ ಜನ ಸಾಮಾನ್ಯರನ್ನು ಸುಲಿಯದೆ ಬಿಡುವುದಿಲ್ಲ. ಹಣ ಕೊಟ್ಟರೆ ಮಾತ್ರ ಸಾರ್ವಜನಿಕ ಕೆಲಸ ಎನ್ನುವಂತಾಗಿದೆ.
ಜಿಲ್ಲೆಯ ಈರುಳ್ಳಿ ಶೆಡ್ ನಿರ್ಮಾಣದ ಸಬ್ಸಿಡಿ ಹಣದಲ್ಲಿ ೨೦ ಸಾವಿರ ಹಣ ಬೇಡಿಕೆ ಇಟ್ಟು ೫ ಸಾವಿರ ರೂಪಾಯಿಗಳನ್ನು ಫೋನ್ ಪೇ ಮೂಲಕ ಪಡೆದಿದ್ದ ಯಾದಗಿರಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವದತ್ತ ಲೋಕಾಯುಕ್ತರು ಬೀಸಿದ ಬಲೆಗೆ ಸಿಲುಕಿದ ಅಧಿಕಾರಿಗಳಾಗಿದ್ದಾರೆ.
ಬದ್ದೆಪಲ್ಲಿ ಗ್ರಾಮದ ಶಂಕ್ರಪ್ಪ ಸರಕಾರದ ಸಹಾಯ ಧನದಲ್ಲಿ ಈರುಳ್ಳಿ ಶೆಡ್ ನಿರ್ಮಿಸಿಕೊಂಡಿದ್ದ.ಸರಕಾರ ೮೦ ಸಾವಿರ ರೂಪಾಯಿಗಳ ಸಬ್ಸಿಡಿ ಹಣ ರೈತರಿಗೆ ಪಾವತಿಸಿತ್ತು. ಸಬ್ಸಿಡಿ ಹಣದಲ್ಲಿ ೨೦ ಸಾವಿರ ರೂಪಾಯಿಗಳನ್ನು ಲಂಚದ ರೂಪದಲ್ಲಿ ತನಗೆ ಕೊಡಬೇಕೆಂದು ಅಧಿಕಾರಿ ರೈತನಲ್ಲಿ ನಿಬಂಧನೆ ಹಾಕಿದ್ದ.
ಸರಕಾರ ಕಾನೂನು ಪ್ರಕಾರ ಸಬ್ಸಿಡಿ ಕೊಡಮಾಡಲಾಗೊದ್ದರೂ ಕೃಷಿ ಅಧಿಕಾರಿ ಲಂಚ ಕೊಡಲು ದುಂಬಾಲು ಬಿದ್ದುದರಿಂದ ರೋಶಿ ಹೋದ ರೈತ ತನ್ನ ಫೋನ್ ಪೇ ಮೂಲಕ ಐದು ಸಾವಿರ ಅಧಿಕಾರಿಗಳ ಅಕೌಂಟಗೆ ಪಾವತಿಸಿದ್ದ.
ರೈತ ಶಂಕ್ರಪ್ಪ ನೀಡಿದ್ದ ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತರು ಶಿವದತ್ತ ಅವರನ್ನು ತೀವ್ರ ವಿಚಾರಣೆಗೆ ಗುರಿ ಪಡಿಸಿ, ತಪಸಣೆಗೆ ಒಳ ಪಡಿಸಲಾಯಿತು.
ಯಾದಗಿರಿ ಲೋಕಾಯುಕ್ತ ಎಸ್ಪಿ ಉಮೇಶ್, ಡಿ.ವಾಯ್.ಎಸ್ಪಿ.ಇನಾಂದಾರ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿ, ವಿಚಾರಣೆ ಮುಂದುವರೆದಿದೆ.