ಮಾನವೀಯತೆ

ಸೇಡಂನ ಎರಡು ಜೀವಂತ ನದಿಗಳು

Vishwaradhya Satyampet

Spread the love

ಇತ್ತೀಚೆಗೆ ಖಾಸಗಿ ಕೆಲಸವೊಂದಕ್ಕಾಗಿ ಸೇಡಂಗೆ ಹೋಗುವ ಪ್ರಸಂಗ ಬಂತು. ತತ್ ಕ್ಷಣ ನೆನಪಾದವರು ಸಹೋದರ ಮಹಿಪಾಲರೆಡ್ಡಿ ಹಾಗೂ ಪ್ರಭಾಕರ ಜೋಷಿ. ವಿಚಾರ ಒಲವು ನಿಲುವು ಬೇರೆ ಬೇರೆಯಾಗಿದ್ದರೂ ಆತ್ಮೀಯತೆ ಇವೆಲ್ಲವನ್ನು ಮೀರಿದ್ದು ಎಂದು ಅರಿತುಕೊಂಡವನು ನಾನು. ಹೀಗಾಗಿ ಎಲ್ಲರೂ ನನ್ನವರೆ.ಇವನಾರವ ಇವನಾರವ ಅಲ್ಲ, ಇವ ನಮ್ಮವ ಇವ ನಮ್ಮವ ಎಂಬ ತತ್ವ ಒಳಗೊಳಗೆ ನನಗರಿಯದೆ ರೂಢಿಯಾಗಿದೆ.

ನಾನು ನಂಬಿರುವ ವೈಚಾರಿಕ ವಿರೋಧಿ ನಿಲುವು ಉಳ್ಳವರೊಂದಿಗೂ ನಾನು ಸಹಜವಾಗಿ ಬೆರೆಯಬಲ್ಲೆ. ಹಾಗಂತ ಅವರೊಂದಿಗೆ ರಾಜಿಯಾಗಿತ್ತಿದ್ದೆನಂತಲ್ಲ. ನಾನು ಅರಿತ ಸತ್ಯವನ್ನು ಬೆರೆಯುವವರೊಂದಿಗೂ ಒಂದಷ್ಟು ಹೊತ್ತು ಹಂಚಿಕೊಳ್ಳುವ ತವಕ. ಅವರಿಗೆ ಅವರವೆ ಆದ ಕನವರಿಕೆಗಳು.

ಸಹೋದರರೊಂದಿಗೆ

ಅವರವರ ನಂಬಿಕೆಗಳೊಂದಿಗೆ ಮುಕ್ತವಾಗಿ ಮಾತನಾಡುವ ಕೌಶಲ್ಯ ನನಗೆ ಕಲಿಸಿಕೊಟ್ಟದ್ದು ವಚನ ಸಾಹಿತ್ಯ ಮತ್ತು ಶರಣರ ಬದುಕು. ಶರಣರ ಸರಳ ಸುಂದರ ಬದುಕನ್ನು ಯಾರಾದರೂ ಅನುಸರಿಸ ಬಹುದಾದ ಬದುಕನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಸತ್ಯಕ್ಕೆ ಒಂದೆ ಮುಖ, ಸುಳ್ಳಿಗೆ ನೂರಾರು ಮುಖ. ಸತ್ಯದ ಮುಂದೆ ಸುಳ್ಳು ಪತರಗುಟ್ಟುತ್ತದೆ.

ಇವೆಲ್ಲವುಗಳ ನಡುವೆ ಸಹೋದರ ಪ್ರಭಾಕರ ಜೋಷಿ ಹಾಗೂ ಮಹಿಪಾಲರೆಡ್ಡಿ ಬರಹದ ಬೆನ್ನು ಬಿದ್ದವರು. ಸ್ಪರ್ಧೆಗೆ ಇಳಿದವರಂತೆ ಪುಸ್ತಕಗಳನ್ನು ಬರೆದು ಪ್ರಕಟಿಸುವವರು. ಒಳ್ಳೆಯ ಹವ್ಯಾಸ ಉಳ್ಳವರು. ತಮ್ಮ ತಮ್ಮ ಮನೆಯಲ್ಲಿ ನೂರಾರು ಪುಸ್ತಕಗಳ ಗ್ರಂಥಾಲಯ ಹೊಂದಿದವರು.

ಬರಹಗಾರ , ಪತ್ರಕರ್ತ ಹಿಂದಿನಂತೆ ದೊಗಳೆ ಪೈಜಾಮ, ನೆಹರೂ ಶರ್ಟ್ ಹಾಕಿಕೊಂಡು ಓಡಾಡುವ ಅಗತ್ಯವಿಲ್ಲ. ಸಮಾಜ ಬದಲಾದಂತೆ ಆತನೂ ಬೇರೆ ಬೇರೆ ಉದ್ಯೋಗಗಳನ್ನು ಮಾಡುತ್ತ ಪತ್ರಕರ್ತ ವೃತ್ತಯನ್ನು ನಡೆಸಿಕೊಂಡು ಹೋಗಬೇಕಿದೆ. ಆರ್ಥಿಕ ತೊಂದರೆಗಳನ್ನು ಇಟ್ಟುಕೊಂಡು ಸಾಮಾಜಿಕ ಸ್ಥಿತಿಯ ಬಗ್ಗೆ ಕಾಳಜಿ ತೋರಲಾಗದು. ಅಂದಂತೆ ಮಹಿಪಾಲರಡ್ಡಿ ಅತ್ಯುತ್ತಮ ಶಾಲೆಯೊಂದನ್ನು ಮುನ್ನಡೆಸಿದ್ದಾರೆ. ಜೋಷಿಯೂ ಸಹ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಭಾಗವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಗರದಲ್ಲಿ ಎಲ್ಲಿ ತಿರುಗಾಡಿದರೂ ಅವರ ಮೇಲಿನ ಪ್ರೀತಿಗೆ ಬರವಿಲ್ಲ. ಇದೆ ನಿಜವಾದ ಸಾರ್ಥಕ ಬದುಕಲ್ಲವೆ ? ಜೋಷಿಗೆ ಈಗ ಸಂಗಾತಿ ಇಲ್ಲ. ಕಳೆದ ಮೂರು ವರ್ಷಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿ ಒಂಟಿಯಾಗಿದ್ದಾರೆ. ಪುಸ್ತಕಗಳ ಓದು, ಸದಾ ಕ್ರೀಯಾಶೀಲ ಚಟುವಟಿಕೆ ಅವರನ್ನು ಕಾಪಿಟ್ಟು ಕಾಯುತ್ತಿವೆ. ರಡ್ಡಿಯ ಬತ್ತದ ಉತ್ಸಾಹ ಅನುಕರಣೀಯ.

ಸೇಡಂನ ಎರಡು ಜೀವಂತ ನದಿಗಳು.

೦ ವಿಶ್ವಾರಾಧ್ಯ ಸತ್ಯಂಪೇಟೆ

Leave a Reply

Your email address will not be published. Required fields are marked *

Back to top button