
ಸಮಾಧಾನ ಆಯ್ತು ಸಂತೋಷವೂ ಆಯ್ತು
ವೀರಣ್ಣ ಕಲಕೇರಿ ಮೇಷ್ಟ್ರೇ
ವೀರಣ್ಣ ವಿರುದ್ದ ಅಮಾನತ್ತು ಆದೇಶ ವಾಪಸ್ಸು ಪಡೆಯಲಿರುವ ಮಂತ್ರಿ ಮಧು ಬಂಗಾರಪ್ಪ
—————————————
ಪ್ರಾರ್ಥಮಿಕ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ರವರಿಗೆ ನಮ್ಮ ವೀರಣ್ಣ ಮಡಿವಾಳರ ವಿಷಯ ಮಾತನಾಡಲು ನಿನ್ನೆ ಮೆಸೇಜ್ ನೀಡಿದ್ದೆ, ಇಂದು ಬೆಳಿಗ್ಗೆ ಏಳು ಗಂಟೆಗೆಲ್ಲ ಅವರೇ ಫೋನ್ ಮಾಡಿದ್ದರು. ನಿನ್ನೆ ನನ್ನ ಮೆಸೇಜ್ ಗೆ ಉತ್ತರಿಸಲು ಆಗದಿದ್ದಕ್ಕೆ ಅವರ ಬ್ಯುಸಿ ಶೆಡ್ಯೂಲ್ ಬಗ್ಗೆ ವಿವರಿಸಿ, ವಿಷಾದ ವ್ಯಕ್ತಪಡಿಸಿದರು. ವೀರಣ್ಣನವರ ಹಿನ್ನೆಲೆ ಅವರಿಗೆ ತಿಳಿದಂತಿತ್ತು. ಅತ್ಯಂತ ಸೌಜನ್ಯ ದಿಂದ ಮಾತನಾಡಿದ ಮಧು ಬಂಗಾರಪ್ಪ ನವರು
“ನೋಡಿ ಸರ್, ನಾವು ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡುತಿದ್ದೇವೆ, ಒಮ್ಮೆಲೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾದ್ಯವಾಗಲ್ಲ, ಇದರ ನಡುವೆ ಸರ್ಕಾರಕ್ಕೂ ಕೆಲವು ಮಿತಿಗಳಿರುತ್ತವೆ.. ಎಲ್ಲಾ ಶಾಲೆಗಳಲ್ಲೂ ಒಂದಲ್ಲ ಒಂದು ಬೇಡಿಕೆ ಇರುತ್ತದೆ ಹಾಗೆಂದು ಎಲ್ಲಾ ಶಾಲಾ ಮುಖ್ಯೋಪಾದ್ಯಾಯರು ಇದೇ ರೀತಿ ಪ್ರತಿಭಟನೆಗೆ ಇಳಿದರೆ ಏನಾಗುತ್ತೆ..? ವಕೀಲರೂ ಆದ ನೀವೇ ಹೇಳಿ ಸರ್.. ಇದು ಕಾನೂನು ಬಾಹಿರ ಅಲ್ಲವೆ? ಸರ್ಕಾರಕ್ಕೆ ಮುಜಗರ ತರುವ ವಿಷಯವಲ್ಲವೆ..?” ಎಂದರು. ಒಂದಷ್ಟು ಸಮಯ ಮಾತಾಡಿದ ನಂತರ “ಅವರಿಗೆ ನಿಮ್ಮಂತವರೆಲ್ಲ ಸ್ವಲ್ಪ ತಿಳಿ ಹೇಳಿ ಸರ್..” ಅಂತ ಹೇಳಿ ಅವರಿಗೆ ಒಂದಷ್ಟು ಎಚ್ಚರಿಕೆ ನೀಡಿ ಅವರ ಅಮಾನತ್ತು ಆದೇಶವನ್ನು ವಾಪಸು ಪಡೆಯುವುದಾಗಿ ತಿಳಿಸಿದರು. ಅವರಿಗೆ ಕೃತಜ್ಞತೆ ಹೇಳಿದೆ.
ವೀರಣ್ಣನವರ ಬೆಂಬಲಕ್ಕೆ ನಿಂತಿರುವ ಎಲ್ಲಾ ಪ್ರಗತಿಪರ ಗೆಳೆಯರು ಮಧು ಬಂಗಾರಪ್ಪ ನವರ ವಿರುದ್ದ, ಸರ್ಕಾರದ ವಿರುದ್ದ ದಯವಿಟ್ಟು ಯಾವುದೇ ರೀತಿಯ ಪೋಸ್ಟ್ ಗಳನ್ನು ಹಾಕುವುದು ಬೇಡ ಎಂದು ತಮ್ನೆಲ್ಲರಲ್ಲಿ ವಿನಂತಿಸುತ್ತೇನೆ.
– ಸಿ.ಎಸ್.ದ್ವಾರಕಾನಾಥ್
ಒಳ್ಳೆಯದು ಸರ್. ಸರಕಾರಿ ನೌಕರರು ಆಡಳಿತದ ಸೂಕ್ಷ್ಮಗಳ ಬಗ್ಗೆ ಅರಿತು ನಡೆಯುವ ಅಗತ್ಯವಿದೆ. ತಮಗೆ ಹಾಗೂ ಮಂತ್ರಿಗಳಿಗೆ ಅಭಿನಂದನೆಗಳು. ಶರಣುಗಳು.