
ಇಂದು ಲಿಂಗಾಯತರು ದಿಕ್ಕು ತಪ್ಪುವವರಲ್ಲ , ದಿಕ್ಕು ತಪ್ಪಿಸುವವರು.
ವೀರಶೈವದ ಬಗ್ಗೆ ಆಗಲಿ , ವೀರಶೈವರ ಬಗ್ಗೆ ಆಗಲಿ ನನಗಾವ ಪೂರ್ವಗ್ರಹ ಪೀಡಿತನಾಗಿಲ್ಲ. ವೀರಶೈವದ ಬಗ್ಗೆ ನನಗೆ ಗೌರವ ಇದೆ, ಅವರ ಬಗ್ಗೆ ಹೆಮ್ಮೆಯೂ ಇದೆ . ಯಾಕೆಂದರೆ ವೀರಶೈವರಿಗೆ ತಮ್ಮದೆ ಆದ ಒಂದು concept ಇದೆ , ಆ concept ನಂತೆ ಅವರು ಹೊರಟಿದ್ದಾರೆ , ಅವರ ಬಗ್ಗೆ ನನಗೆ ಯಾವ ಗೊಂದಲವು ಮತ್ತು ಅಸಹಿಷ್ಣುತೆಯೂ ಇಲ್ಲ.
ಆದರೆ ಲಿಂಗಾಯತರು ಎಂದೂ ಹೇಳಿಕೊಂಡು ಬಸವಣ್ಣನನ್ನು ಒಪ್ಪದೇ! , ರೇಣುಕಾಚಾರ್ಯರ ಬಗ್ಗೆಯೂ ಜೈ ಎನ್ನುವ ಲಿಂಗಾಯತರ ಬಗ್ಗೆ ಕನಿಕರ ಮತ್ತು ಅವರ ದಡ್ಡತನದ ಬಗ್ಗೆ ಮರುಕವೆನಿಸುತ್ತಿದೆ. ಇದಕ್ಕೆ ಯಾರ್ಯರೊ ಸಾಕಷ್ಟು ಸಮಾಧಾನದ ಕಾಮೆಂಟ್ ಗಳು ನೀಡಬಹುದು , ಅದು ಅವರ ಅರಿವಿನ ಕೊರತೆಯೇ ಹೊರತು ಬೇರೇನೂ ಅಲ್ಲ. ವೀರಶೈವರಿಗೆ ಅವರ concept ಏನಂದ್ರೆ ಅವರು ಇಡಿ ಲಿಂಗಾಯತ ಸಮುದಾಯದ ಗುರುಗಳು , ಲಿಂಗಾಯತರು ನಮ್ಮ ಭಕ್ತರು ಎನ್ನುವ ಒಂದು ಕ್ಲೀಯರ್ ಆದ ತಂತ್ರಗಾರಿಕೆಗೆ ಅವರು ಬದ್ದರಾಗಿದ್ದಾರೆ. ಆದರೆ ಈ ಲಿಂಗಾಯತರಿಗೆ ತಾವು ಯಾರೆಂಬ ಅರಿವು ಇದೆಯೋ !!!??ಇಲ್ಲವೋ !!!??. ಅಂತ ಹೇಳಲು ಆಗಲ್ಲ. ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ಸಬಲರಾಗಿರುವ ಇವರು , ಈ ವಿಷಯದಲ್ಲೇಕೆ ಗುಲಾಮಗಿರಿಗೆ ಒತ್ತಿ ಬಿದ್ದಿದ್ದಾರೆ ಗೊತ್ತಿಲ್ಲ.
ಇದೆ ವಿಷಯ ಇಂದು ಬೀದರಿ ಸಾಹೇಬ್ರಗೂ ಅನ್ವಯವಾಗುತ್ತೆ. ಹುಟ್ಟಿನಿಂದ ಲಿಂಗಾಯತನಾಗಿ , ಅದು ಬಸವಣ್ಣನ ನಾಡಿನಿಂದ ಬಂದವರವಾಗಿ ಬಸವಣ್ಣನ ಅಸ್ಥಿತ್ವಕ್ಕೆ ಧಕ್ಕೆ ಮಾಡುವಂತ ಇವರ ಹೇಳಿಕೆ ನಿಜಕ್ಕೂ ಅಘಾತಕಾರಿ. ಕರ್ನಾಟಕದ ಅತ್ಯಂತ ಉನ್ನತ ಹುದ್ದೆಯಲ್ಲಿದ್ದು , ಸಂವಿಧಾನಕ ಮತ್ತು ಆಡಳಿತಾತ್ಮಕ ಹುದ್ದೆಯಲ್ಲಿದ್ದು ನಿವೃತ್ತಿ ಹೊಂದಿ , ಲಿಂಗಾಯತ ಮತ್ತು ಬಸವಣ್ಣನ ಬಗ್ಗೆ ಎಲ್ಲಾ ತಿಳಿದಿರುವ ಬಿದಿರಯವರ ಹೇಳಿಕೆ , ಹಾಸ್ಯಾಸ್ಪದ ಎನ್ನಬೇಕೊ , ಅಥವಾ ಅಧಿಕಾರದ ಸ್ವಾರ್ಥಕ್ಕಾಗಿ ತಮ್ಮನ್ನು ತಾವು ಮಾರಿಕೊಂಡ ಲಿಂಗಾಯತ ಎನ್ನಬೇಕೊ ತಿಳಿಯದಂತಿದೆ.
ಇಂದು ಅಧಿಕಾರದ ಉನ್ನತೆಯ ಸ್ಥಾನದಲ್ಲಿದ್ದು , ವೀರಶೈವ ಲಿಂಗಾಯತ ಧರ್ಮದ ಒಂದು ಒಳಪಂಗಡ ಎನ್ನುವ ವಾಸ್ತದ ಅರಿವು ಇದ್ದು ಧೈರ್ಯವಾಗಿ ಸತ್ಯ ಹೇಳಲು ಯಾಕೆ ಮುಜುಗರ?. ಇದರಿಂದ ಅವರು ಸಾಧಿಸುವುದಾದರೂ ಏನೂ ? . ಒಂದು ಕಾಲಘಟ್ಟದಲ್ಲಿ ಒಬ್ಬ ಖಾವಿಧಾರಿಯ ನಿರ್ಧಾರದಿಂದ ಲಿಂಗಾಯತರು ಇಷ್ಟು ಗೊಂದಲದಲ್ಲಿ ಸಿಕ್ಕಾಗಿಕೊಳ್ಳುವಂತೆ ಮಾಡಿದರು. ಇಂದು ತಾವು ಲಿಂಗಾಯತರಾಗಿ ಹುಟ್ಟಿ ಮತ್ತೆ ಲಿಂಗಾಯತರನ್ನು ದಿಕ್ಕು ತಪ್ಪಿಸುವಂತ ತಮ್ಮ ಹೇಳಿಕೆ ನಿಜಕ್ಕೂ ಬಸವ ದ್ರೋಹ . ಇಂತಹ ಐತಿಹಾಸಿಕ ಪ್ರಮಾದಕ್ಕೆ ತಾವು ಗುರಿಯಾಗಬೇಡಿ.
ವೀರಶೈವ ಲಿಂಗಾಯತ ಧರ್ಮದ ಉಪ ಪಂಗಡ ಎಂದು ಅವರನ್ನು ಒಪ್ಪಿಸಿ ಲಿಂಗಾಯತಕ್ಕೆ ಕರೆತರುವ ಜವಾಬ್ದಾರಿ ನಿಮ್ಮ ಮೇಲಿದೆ . ಈ ವಾಸ್ತವ ಸತ್ಯದ ಅರಿವು ತಮಗೆ ಇದೆ. ಲಿಂಗಾಯತರು ವೀರಶೈವರನ್ನು ದ್ವೇಷಿಸುವುದಿಲ್ಲ , ಯಾಕೆಂದರೆ ಒಂದು ಕಾಲದಲ್ಲಿ ವೀರಮಾಹೇಶ್ವರಾಗಿದ್ದವರು ಇಂದು ವೀರಶೈವರು ಆಗಿದ್ದಾರೆ . ವೀರಮಾಹೇಶ್ವರರು ಲಿಂಗಾಯತ ಧರ್ಮದವರು . ಅವರನ್ನು ಒಪ್ಪಿಸಿ ಲಿಂಗಾಯತ ಧರ್ಮಕ್ಕೆ ಕರೆತರುವಂತ ಕೆಲಸ ತಮ್ಮಿಂದಾಗಲಿ. ಕಲ್ಲಿನಲ್ಲಿ ಹುಟ್ಟಿದ ರೇಣುಕಾಚಾರ್ಯರನ್ನು , ಐತಿಹಾಸಿಕ ಪುರುಷು ಬಸವಣ್ಣನನ್ನೊಂದಿಗೆ ಸಮೀಕರಿಸು ತಮ್ಮ ವಿಚಾರದ ಹಿಂದೆ ತಮ್ಮ ಅಧಿಕಾರದ ಸ್ವಾರ್ಥ ತುಂಬಿದೆ . ಮತ್ತೊಮ್ಮೆ ಲಿಂಗಾಯತರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಬೇಡಿ, ಯಾಕೆಂದರೆ ಇಂದು ಲಿಂಗಾಯತರು ದಿಕ್ಕು ತಪ್ಪುವವರು ಅಲ್ಲ , ದಿಕ್ಕು ಬದಲಾಯಿಸುವವರು ಎನ್ನುವುದು ಮರೆಯ ಬೇಡಿರಿ. ಸಮಯ ಬಂದರೆ ನಿಮ್ಮ ದಿಕ್ಕು ಬದಲಾಯಿಸುವ ತಾಕತ್ತು ಇಂದಿನ ಲಿಂಗಾಯತರಲ್ಲಿ ಇದೆ. ಹಾಗಾಗಿ ಸಮಾಜಕ್ಕೆ ಸಮುದಾಯಕ್ಕೆ ಒಳಿತಾಗುವಂತ ಕೆಲಸಗಳು ತಮ್ಮಿಂದ ಆಗಲಿ ಎಂದು ಬಯಸುವ ಲಿಂಗಾಯತ.
ಡಾ.ರಾಜಶೇಖರ ನಾರನಾಳ.
ಕಜದರ್ ಇಲ್ಲದ ಬಿದರಿ
ಸೊಗಸಾದ ಲೇಖನ…
ಆದರೆ ಈ ಲೇಖನ ಬಿದರಿ ಅವರಿಗೆ ಮುಟ್ಟಬೇಕಲ್ಲವೇ ?ಭೌತಕವಾಗಿ ಅಲ್ಲ ಶರಣರೇ ಹೃದಯಕ್ಕೆ ತಲುಪಬೇಕಲ್ಲವೇ?
ಸೊಗಸಾದ ಲೇಖನ…
ಆದರೆ ಈ ಲೇಖನ ಬಿದರಿ ಅವರಿಗೆ ಮುಟ್ಟಬೇಕಲ್ಲವೇ ?ಭೌತಿಕವಾಗಿ ಅಲ್ಲ ಶರಣರೇ ಹೃದಯಕ್ಕೆ ತಲುಪಬೇಕಲ್ಲವೇ?